ಸೀರೆಯೊಳಗಡೆ ಕಷ್ಟವಿದೆ

ಸೀರೆಯೊಳಗಡೆ ಕಷ್ಟವಿದೆ
ಹಾಗೆಂದರೇನು?
ಕಷ್ಟಕ್ಕೆ ಸೀರೆಯೇ ಆಗಬೇಕೇನು?
ಹಾಗಿದ್ದರೆ ಬೇಡಬಿಡಿ ಸೀರೆ
ತೊಟ್ಟುಕೊಳ್ಳಿ ಮೇಲಂಗಿ ಮತ್ತು ಧೋತಿ
ಇಲ್ಲವೇ ಪ್ಯಾಂಟು ಮತ್ತು ಅಂಗಿ

ಹಾಕಿಕೊಳ್ಳದಿರಿ ಬೇಲಿ
ನಿಮ್ಮ ಸುತ್ತ ನಿಮ್ಮಷ್ಟಕ್ಕೆ ನೀವೆ
ಹೆಣ್ಣು ಅಬಲೆ, ದುರ್ಬಲೆ
ಅಂದುಕೊಳ್ಳದಿರಿ

ಮಾತಿರಲಿ ಮೊನಚು ಮೊಳೆಯಂತೆ
ದೌರ್ಜನ್ಯಕ್ಕಿರಲಿ ಕನಲಿ
ಕುದಿವ ಕುಲುಮೆಯ ತಾಪ

ಬಗ್ಗಿದಷ್ಟು ಮೆಟ್ಟುವ ಆಸೆ
ಪ್ರಾಣಿ ಸಹಜ ಗುಣ
ದಿಕ್ಕರಿಸಿ, ಉಕ್ಕಿ ಬರಲಿದೆ
ಸೌಜನ್ಯ ಸನ್ಮಾನ

ದೂರು ಹೇಳದಿರಿ ನಿರುತ
ಧೈರ್ಯವಿರೆ, ದರ್ಪದ
ಬೆನ್ನಿಗೊಂದು ಗುದ್ದಿ, ಪಾಠ ಕಲಿಸಿ
ದುಗುಡ ಪರಿಹಿಸಿಕೊಳ್ಳಿ

ತಾಳ್ಮೆಯೆಂದರೆ ಸೀರೆ
ಕರುಣೆಯೆಂದರೆ ಸೀರೆ
ಶೀಲವೆಂದರೂ ಸೀರೆ

ಉಬ್ಬಿಸಿ ಎತ್ತರ ತೋರಿಸಿ
ದೊಪ್ಪನೆ ಕೆಳಗೆ ತಳ್ಳಿ ಬಿಡುವವರ
ಕೂಡ ಇರಲಿ ಜಾಗೃತಿ

ಹಾತೆಯಾಗದಿರಿ
ಬೆಳಕಿನ ಮುದ್ದಿಗೋಸ್ಕರ
ಜ್ವಾಲೆಗೆ ಬಲಿಯಾಗುವ
ಬದಲಿಗೆ ಮಿಂಚು ಹುಳುವಾಗಿ
ನಿಮ್ಮ ಪಾಲಿಗೆ ನೀವೆ ಬೆಳಕಾಗಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಕು ಬೇಕು
Next post ಪ್ರಿಯದರ್ಶಿನಿ

ಸಣ್ಣ ಕತೆ

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

cheap jordans|wholesale air max|wholesale jordans|wholesale jewelry|wholesale jerseys